ವಿಕ್ರಮಾರ್ಜುನ ವಿಜಯ ಮತ್ತು ಗದಾಯುದ್ಧ
1) ಕನ್ನಡದ ಕಾವ್ಯ ಪಿತಾಮಹ ಯಾರು.?
☄ ಪಂಪ
2) ರನ್ನನ ನಾಟಕೀಯ ಕಾವ್ಯ ಯಾವುದು,?
☄ ಗದಾಯುದ್ಧ
3) ನಾಡೋಜ ಪಂಪ ಕೃತಿಯ ಕರ್ತೃ ಯಾರು.?
☄ ಮುಳಿಯ ತಿಮ್ಮಪ್ಪಯ್ಯ
4) ಪಂಪನ ಲೌಕಿಕ ಕಾವ್ಯ ಯಾವುದು.?
☄ವಿಕ್ರಮಾರ್ಜುನ ವಿಜಯ
5) ಪಂಪ ಭಾರತದಲ್ಲಿ ವರ್ಣಿತವಾಗಿರುವ ಸರೋವರ ಯಾವುದು.?
☄ವೈಶಂಪಾಯನ
6) ಪಂಪಭಾರತದಲ್ಲಿ " ನೆತ್ತಮನಾಡಿ ,ಭಾನುಮತಿ ಸೋಲ್ತೋಡೆ ...ಮುತ್ತಿನ ಕೇಡನೆ ನೋಡಿ ನೋಡಿ ಬಳುತ್ತಿವೆ.," ಈ ಮಾತು ಯಾರ ಸ್ನೇಹದ ಸಂಕೇತವಾಗಿದೆ..?
☄ ಕರ್ಣ -ದುರ್ಯೋಧನ
7) ಹಿತಮಿತ ಮೃದು ವಚನ ,ಪ್ರಸನ್ನ ಗಂಭೀರವದನ ರಚನ ಚತುರ '' ಯಾರ ಶೈಲಿ ಯಾಗಿದೆ..?
☄ ಪಂಪ
8) ಪಂಪ ಭಾರತದಲ್ಲಿ ಕೊನೆಯಲ್ಲಿ ಅರ್ಜುನನೊಡನೆ ಪಟ್ಟಕ್ಕೇರುವಳು ಯಾರು,?
☄ ಸುಭದ್ರೆ
9) " ಬೆಳಗುವೆನಿಲ್ಲಿ ಲೌಕಿಕವನಲ್ಲಿ ಜಿನಾಗಮಂ " ಎಂಬ ಉಕ್ತಿ ಬರುವ ಕಾವ್ಯ,?
☄ ಪಂಪ ಭಾರತ
10) " ಕರ್ಣರಸಾಯನ ಮಲ್ತೆ ಭಾರತಂ " ಎಂಬ ಉಕ್ತಿ ಬರುವ ಕಾವ್ಯ ಯಾವುದು..?
☄ಪಂಪ ಭಾರತ
11) ಪಂಪ ಭಾರತದಲ್ಲಿ ಬರುವ "ಅತ್ಯುನ್ನತಿಯೊಳಮಂ ಸಿಂಧೂದ್ಭವಮಂ " ಎಂದರೆ ಯಾರನ್ನು ಕರೆಯುತ್ತಾರೆ .?
☄ ಭೀಷ್ಮ
12) " ಭೇದಿಸಲೆಂದು ದಲ್ ನುಡಿದರೆನ್ನದಿರೊಯ್ಯನೆ " ಎಂಬ ಕೃಷ್ಣ ಯಾರ ಕುರಿತು ಹೇಳಿದ್ದಾನೆ..?
☄ಕರ್ಣ
13) " ಪಿಡಿಯೆಂ ಚಕ್ರವನೆಂಬ ಚಕ್ರಯ ನಿಳಾಚಕ್ರಂ ಭಯಂಗೊಳ್ವಿನಂ " ಎಂದು ತನ್ನ ಕಾರ್ಯ ತಿಳಿಸಿದವರು ಯಾರು,?
☄ ಭೀಷ್ಮ
14) " ಪಗೆವರ ನಿಟ್ಟೆಲ್ವಂ ಮುರಿವೊಡೆಗೆ ಪಟ್ಟಂಗಟ್ಟಾ " ಎಂದು ಹೇಳಿದವರು..?
☄ ಕರ್ಣ
15) ಪಂಪನ ಯಾವ ಕೃತಿ ಮೂರು ತಿಂಗಳಲ್ಲಿ ರಚನೆಯಾಗಿದೆ,?
☄ ಪಂಪ ಭಾರತ
16) " ಕತೆ ಪಿರಿದಾದೊಡಂ ಕತೆಯ ಮೆಯ್ಗಿಡಲೀಯದೆ " ರಚಿತವಾದ ಪಂಪನ ಕಾವ್ಯ ಯಾವುದು,?
☄ ಪಂಪ ಭಾರತ
17) ಪಂಪ ಭಾರತದಲ್ಲಿರುವ ಒಟ್ಟು ಆಶ್ವಾಸಗಳು .?
☄14 ಆಶ್ವಾಸಗಳು
18) " ಪಂಪ ಕನ್ನಡ ಕಾಳಿದಾಸ " ಎಂದು ಹೇಳಿದವರು,?
☄ ತಿ.ನಂ.ಶ್ರೀ
19) ಸೂಲ್ ಪಡೆಯಲಪ್ಪುದು ಕಾಣ ಮಹಾಜಿರಂಗದೊಳ್ ಎಂಬ ವಾಕ್ಯ ಪಂಪನ ಯಾವ ಕಾವ್ಯದಲ್ಲಿದೆ ,?
☄ ಪಂಪ ಭಾರತ
20) " ಸಂಸ್ಕೃತ ಸಾಹಿತ್ಯಕ್ಕೆ ಆದಿಕವಿ ವಾಲ್ಮೀಕಿ ಆದಂತೆ ಕನ್ನಡ ಆದಿಕವಿ ಪಂಪ " ಈ ಮಾತನ್ನು ಹೇಳಿದವರು ಯಾರು.?
☄ ಟಿ.ಎಸ್.ವೆಂಕಣಯ್ಯ
21) " ಓಲೈಸಿ ಬಾಳುವುದೇ ಕಷ್ಟಂ ಇಳಾಧಿನಾಧರಂ " ಈ ಮಾತನ್ನು ಹೇಳಿದ ಕವಿ ಯಾರು.?
☄ಪಂಪ
22) ವಿಕ್ರಮಾರ್ಜುನ ವಿಜಯದ ಮೂಲ ಆಕರ ಗ್ರಂಥ ಯಾವುದು.?
☄ ವ್ಯಾಸ ಭಾರತ
23) ರನ್ನನನ್ನು ಶಕ್ತಿ ಕವಿ ಎಂದು ಕರೆದವರು ಯಾರು.?
☄ ಕುವೆಂಪು
24) " ನಿನ್ನಂ ಪೆತ್ತಳ್ ವೊಲೆವೊತ್ತಳೆ ವೀರ ಜನನಿವೆಸಂ ವೆತ್ತಳ್ " ಎಂಬ ಕಾವ್ಯವನ್ನು ದುರ್ಯೋಧನ ಯಾರನ್ನು ಕುರಿತು ಹೇಳಿದ್ದಾನೆ,?
☄ಅಭಿಮನ್ಯು
25) ರನ್ನ ತನ್ನ ಗದಾಯುದ್ಧವನ್ನು ಯಾರನ್ನು ಸಮೀಕರಿಸಿ ಹೇಳಿದ್ದಾನೆ,?
☄ಸತ್ಯಾಶ್ರಯ ಇರಿವ ಬೆಡಂಗ
26) " ನೆಲಕಿರಿವೆನೆಂದು ಬಗೆದರೆ.? ಛಲಕಿರಿವೆಂ ಪಾಂಡು ಸುತರೋಳಿ ಕೋಲ್ಲಿಸಿದ ನೆಲನಿದು ಪಾಳ್ನೆಲನೆನಗೆ " ಎಂಬ ಸಾಲು ಬರುವ ಕಾವ್ಯ ಯಾವುದು.?
☄ಗದಾಯುದ್ಧ (ದುರ್ಯೋಧನ)
27) ಸಾಹಿತ್ಯ ಸಂಶೋಧನ ಕೃತಿಯಲ್ಲಿ " ಭೀಮನೇ ನಾಯಕ ರೌದ್ರವೇ " ಮುಖ್ಯ ರಸ ಎಂದವರು ..?
☄ದ.ರಾ.ಬೇಂದ್ರೆ
28) ರನ್ನನು ಸಿಂಹಾವಲೋಕನ ಕ್ರಮದಿಂದ ಬರೆದ ಕಾವ್ಯ ಯಾವುದು,?
☄ ಗದಾಯುದ್ಧ
29) " ಕೃತಿ ಪರೀಕ್ಷಿಪಂಗೆಂಟೆರ್ದೆಯೆ " ಎಂದು ಸವಾಲು ಹಾಕಿದ ರನ್ನನ ಕೃತಿ ಯಾವುದು..?
☄ಗದಾಯುದ್ಧ
30) 'ರನ್ನ ವರ ಕವಿ , ಚಿರಕವಿ ಮತ್ತು ಮಹಾಕವಿಯಾಗಿ ನಿಂತಿದ್ದಾನೆ ' ಈ ಹೇಳಿಕೆಯನ್ನು ನೀಡಿರುವವರು..?
☄ ಬಿ.ಎಂ.ಶ್ರೀ
31) " ನಾಟಕೀಯತೆಯಲ್ಲಿ ರನ್ನನು ಪಂಪನಿಗಿಂತಲೂ ಒಂದು ಕೈ ಮೇಲು " ಎಂದು ಹೇಳಿದವರು .?
☄ರಂ.ಶ್ರೀ.ಮುಗಳಿ
32) ಜೋಳದ ಪಾಳಿ ಎಂದರೆ..?
☄ ಅನ್ನದ ಹಂಗು(ಋಣ)
33) " ನೀರೊಳಗಿರ್ದುಂ ಬೆಮರ್ತನುರಗಪತಾಕಂ " ಎಂಬ ಉಕ್ತಿ ಬರುವ ಕೃತಿ..?
☄ ಗದಾಯುದ್ಧ
34) ಗದಾಯುದ್ಧ ಸಂಗ್ರಹ ಕೃತಿ ಬರೆದ ಕವಿ ಯಾರು.?
☄ ತಿ.ನಂ.ಶ್ರೀ
35) ರನ್ನನ ದುರ್ಯೋಧನ ಮಹಾನುಭಾವ ಎಂದವರು ಯಾರು,?
☄ಅನಂತ ರಂಗಚಾರ್
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
ಧನ್ಯವಾದಗಳು