ಹರಿಹರನ ಉಡತಡಿಯ ಅಕ್ಕಮಹಾದೇವಿ ರಗಳೆ
೧.ಯಾವ ಭಾಷೆಯಲ್ಲೂ ಕಾಣಸಿಗದ ಕನ್ನಡದ ವಿಶಿಷ್ಟ ಸಾಹಿತ್ಯ ಪ್ರಕಾರ ಯಾವುದು?ಡಿಯ ಅಕ್ಕಮಹಾದೇವಿ ರಗಳೆ☄
೧.ಯಾವ ಭಾಷೆಯಲ್ಲೂ ಕಾಣಸಿಗದ ಕನ್ನಡದ ವಿಶಿಷ್ಟ ಸಾಹಿತ್ಯ ಪ್ರಕಾರ ಯಾವುದು?
✍ವಚನ ಸಾಹಿತ್ಯ.
೨.ಯಾವ ಸಾಹಿತ್ಯದ ಉದಯದಿಂದ ಕನ್ನಡಕ್ಕೊಂದು ಕೋಡು ಮೂಡಿತು?
✍ವಚನ ವಾಙ್ಮಯ(ಸಾಹಿತ್ಯ).
೩.ಕನ್ನಡ ಸಾಹಿತ್ಯದ ನೂತನ ಯುಗ ಪ್ರವರ್ತಕನೆಂದು ಯಾರನ್ನು ಕರೆಯುತ್ತಾರೆ?
✍ಹರಿಹರ.
೪.ಹರಿಹರ ಯುಗ ಎಂದೇ ಕರೆದು ಯುಗದ ಕವಿಯ ಸ್ಥಾನ ನೀಡಿದವರು ಯಾರು?
✍ತ.ಶು.ಶಾಮರಾಯ.
೫.ಹರಿಹರನ ಕಾಲ ತಿಳಿಸಿ.
✍೧೨೦೦.
೬.ಈ ಅಂಶ ಹರಿಹರನಿಗೆ ಸಂಬಂಧಿಸಿಲ್ಲ.
ಅ.ಈತನ ಜನ್ಮಸ್ಥಳ ಹಂಪಿ
ಆ.ಮಹಾದೇವಭಟ್ಟ ಶರ್ವಾಣಿ ಪೋಷಕರು.
ಇ.ಹೊಯ್ಸಳರ ನರಸಿಂಹ ಬಲ್ಲಾಳನಲ್ಲಿ ಕರಣಿಕನಾಗಿದ್ದನು.
ಈ.ನಾಗವರ್ಮನ ಸಮಕಾಲೀನ.
✍ಈ. ನಾಗವರ್ಮನ ಸಮಕಾಲೀನ.✅
೭.ಹರಿಹರನ ತಂಗಿಯ ಹೆಸರೇನು?
✍ರುದ್ರಾಣಿ.
೮.ಹರಿಹರನ ಅಳಿಯ ಯಾರು?
✍ರಾಘವಾಂಕ.
೯.ಹರಿಹರನಗಿದ್ದ ಬಿರುದುಗಳು ಯಾವುವು?
✍ಉಭಯಕವಿ ಕಮಲರವಿ
☄ರಗಳೆಯ ಕವಿ.
☄ರಗಳೆ ಬ್ರಹ್ಮ
☄ಶಿವಕವಿ.
☄ದೇವಕವಿ.
೧೧.ಹರಿಹರನ ಕೃತಿಗಳನ್ನು ತಿಳಿಸಿ.
✍ಗಿರಿಜಾ ಕಲ್ಯಾಣ
☄ಪಂಪಾಶತಕ
☄ರಕ್ಷಾಶತಕ.
☄ಮುಡಿಗೆಯ ಅಷ್ಟಕ.
☄ಅಷ್ಟಶತಕ.
೧೨.ವೀರಶೈವ ಕವಿಗಳ ಶಾತಕ ಸಾಹಿತ್ಯ ಸೃಷ್ಟಿಗೆ ಯಾವ ಶತಕ ನಾಂದಿಯಾಗಿದೆ?
✍ಪಂಪಾಶತಕ.
೧೩.ಹರಿಹರನ ಸಾಹಿತ್ಯಾರಂಭ ಯಾವುದರಿಂದ ಪ್ರಾರಂಭವಾಯಿತು?
✍ಪಂಪಶತಕ.
೧೪.ಹರಿಹರಕವಿಯ ಪವಾಡ ನಿರೂಪಿಸುವ ಎಂಟು ವೃತ್ತಗಳ ಪುಟ್ಟ ಗ್ರಂಥ ಯಾವುದು?
✍ಮುಡಿಗೆಯ ಅಷ್ಟಕ.
೧೫.ಮುಡಿಗೆಯ ಅಷ್ಟಕದಲ್ಲಿ ಯಾವ ಅಕ್ಷರದ ಪ್ರಾಸ ಬಳಸಿರುವುದು ಆಶ್ಚರ್ಯಕರವಾಗಿದೆ.
✍"ಕ್ಷ" ಅಕ್ಷರ.
೧೬.ಹರಿಹರನು ಮಾಡಿದ ಪವಾಡ ಯಾವುದು?
✍ವಿರೂಪಾಕ್ಷ ದೇವಾಲಯದಲ್ಲಿ ನಡೆದ ಟೋಪಿ ಪವಾಡ.
೧೭.ರಳ ಕುಳ ಕ್ಷಳಗಳ ವರ್ಣಮಾಲೆ ಕೈ ಬಿಟ್ಟವರು ಯಾರು?
✍ಹರಿಹರ.
೧೮.ಹರಿಹರ ನರಸಿಂಹ ಬಲ್ಲಾಳನಲ್ಲಿ ಕರಣಿಕನಾಗಿದ್ದನೆಂದು ಯಾವುದರಿಂದ ತಿಳಿದು ಬಂದಿದೆ?
✍ವೀರಶೈವಪುರಾಣ
೧೯.ಹಂಪೆಯ ರಾಜ ದೇವರಸ ಹರಿಹರನನ್ನು ಭಕ್ತಿಯಿಂದ ಬರಮಾಡಿಕೊಂಡ- ಈ ಹೇಳಿಕೆ ಯಾವುದರಲ್ಲಿದೆ.
✍ಪುರಾಣಗಳಲ್ಲಿ
೨೦.ಹಿರೇಮಲ್ಲೂರು ಈಶ್ವರನ್ ಹಾಗೂ ದೇವಿರಪ್ಪರವರ ಪ್ರಕಾರ ಹರಿಹರ ಎಷ್ಟು ರಗಳೆ ಬರೆದಿದ್ದಾನೆ?
✍೧೦೬ ಮತ್ತು ೯೧.
೨೧.ಹರಿಹರ ಯಾವುದನ್ನ ಆಧಾರವಾಗಿಟ್ಟುಕೊಂಡು ಕನ್ನಡದಲ್ಲಿ ಶಿವಶರಣರ ಕಥೆ ಬರೆದಿದ್ದಾನೆ?
✍ತಮಿಳುನಾಡಿನ ಪೆರಿಯಾರ್ ಪುರಾಣ.
೨೨.ಹರಿಹರ ರಚಿಸಿರುವ ಮಹಾದೇವಿಗೆ ಸಂಬಂದಪಟ್ಟ ರಗಳೆ ಯಾವುದು?
✍ಉಡತಡಿಯ ಮಹಾದೇವಿ ಅಕ್ಕನ ರಗಳೆ.
೨೩.ದೇವಿ ಎಮಗೋರ್ವ ಪುತ್ರಿಯನಿವುದಲೆ ತಾಯಿ ಎಂದು ಯಾರು ಯಾರಿಗೆ ಬೇಡಿಕೊಂಡರು?
✍ಭಕ್ತೆ ಪಾರ್ವತಿಯಲ್ಲಿ.
೨೪. ಕಲ್ಪತರುವಿಂ ಸಣ್ಣನನೆ ಹುಟ್ಟುವಂತೆ ಯಾರು ಹುಟ್ಟಿದರು?
✍ಮಹಾದೇವಿ.
೨೫.ಪ್ರಭುದೇವರ ಹತ್ತು ವಚನಕ್ಕೆ ಅಜಗಣ್ಣನ ಐದು ವಚನ,ಅಜಗಣ್ಣನ ಐದು ವಚನಕ್ಕೆ ಅಕ್ಕಳ ಒಂದು ವಚನ ಎಂದು ಹೇಳಿದವರು ಯಾರು?
✍ಚನ್ನಬಸವಣ್ಣ.
೨೬.ಅಕ್ಕಮಹಾದೇವಿಯಂತೆ ಬಾಳಿದ ತಮಿಳಿನ ಭಕ್ತೆ ಯಾರು.
✍ಅಂಡಾಳ್.
೨೭.ಹರಿಹರನಲ್ಲಿ:ಶಿವಭಕ್ತ ಶಿವಭಕ್ತೆ:: ಚಾಮರಸನಲ್ಲಿ:......
✍ನಿರ್ಮಲೆ ಸುಮತಿ.
೨೮.ಬೆಳಕಿಗೆ ಕತ್ತಲೆಯೊಡನೆ ಸ್ನೇಹವೇ? ಇಲ್ಲಿ ಬೆಳಕು ಹಾಗೂ ಕತ್ತಲೆ ಎಂದರೆ ಯಾರು?
✍ಬೆಳಕು(ಮಹಾದೇವಿ ಅಕ್ಕ) ಕತ್ತಲೆ(ಕೌಶಿಕ)
೨೯.ಎಲೆ ಭವಿಯೆ ನೋಡಿ ಪೋಡಮಡು ಎಂದು ಯಾರು ಯಾರಿಗೆ ಹೇಳಿದರು?
✍ಮಹಾದೇವ( ರುದ್ರಕನ್ನಿಕೆ)
೩೦.ಸಪ್ತಮಾತೃಕೆಯರನ್ನು ತಿಳಿಸಿ.
☄ಬ್ರಾಹ್ಮಿ(ಹಂಸ ವಾಹನ)
☄ಮಾಹೇಶ್ವರಿ(ವೃಷಭ ವಾಹನ)
☄ಕೌಮಾರಿ(ನವಿಲು ವಾಹನ)
☄ವೈಷ್ಣವಿ(ಗರುಡ ವಾಹನ)
☄ವಾರಾಹಿ(ಎಮ್ಮೆ ವಾಹನ)
☄ಇಂದ್ರಾಣಿ (ಆನೆ ವಾಹನ)
☄ಚಾಮುಂಡಿ(ಹುಲಿ ವಾಹನ)
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
ಧನ್ಯವಾದಗಳು